ಈ ವಾರದ ವಿಜಯಕರ್ನಾಟಕದ ಸಂಚಿಕೆಯಲ್ಲಿ ಬೆಳೆಗೆರೆ ಬರೆದ ಲೇಖನ ಓದಿದೆ ’madness habits' ಕುರಿತಾಗಿ. ಒಂದೊಂದು ಅಕ್ಷರವೂ ನಿಜ ಅಂತ ಅನ್ನಿಸ್ತು ನನಗೆ.
ನನ್ನ ಪ್ರಕಾರ ಈ ಜಗತ್ತಲ್ಲಿ ಎಲ್ಲರಿಗೂ ಒಂದೊಂದು ರೀತಿಯ ’ಹುಚ್ಚು’ ಅಂದರೆ ತಪ್ಪೆನಿಸದು! ಕೆಲವರಿಗೆ ಓದುವ ಹುಚ್ಚು; ಡಿಗ್ರಿಯ ಮೇಲೆ ಡಿಗ್ರಿ ಪಡೆಯುವ ಹುಚ್ಚು;ಇನ್ನು ಕೆಲವರಿಗೆ ದುಡ್ಡಿನ ಹುಚ್ಚು. ಹೆಣ್ಣು, ಹೊನ್ನು, ಮಣ್ಣು... ಇನ್ನೇನೋ...
ಈಗ ನಾನಿಲ್ಲಿ ಮಾತನಾಡಲು ಹೊರಟಿದ್ದು ’ಮಾತಿನ ಹುಚ್ಚು’ ಇರುವವರ ಬಗ್ಗೆ. ಇವರಿಗೆ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಿಕೊಳ್ಳುವುದೇ ಒಂದು ಗೀಳು. ಯಾರದೇ ಮನೆಗೆ ಭೇಟಿ ನೀಡಲಿ, ಅಥವಾ ಮದುವೆ ಮುಂಜಿ ಸಮಾರಂಭಗಳಿಗೆ ಹೋಗಿ ಬರಲಿ, ಅಲ್ಲಿನ ಲೋಪ ದೋಷಗಳನ್ನು ಎತ್ತಿ ಹಿಡಿದು ಮಾತನಾಡದಿದ್ರೆ ರಾತ್ರಿ ನಿದ್ದೆ ಬಾರದು ಇಂಥವರಿಗೆ! ಆದರೆ ಇವರ ’ತಪ್ಪು ಹುಡುಕೋ ಪಾಲಿಸಿ’ ಹೊರಗಿವನರಿಗೆ ಮಾತ್ರ; ತಮಗೆ ಹತ್ತಿರದ ಜನರ ಬಗ್ಗೆ ಸಂಪೂರ್ಣ ಸ್ಪೆಷಲ್ಲು ಡಿಸ್ಕೌಂಟು ಇದೆ! ಅದೇನೋ ಗಾದೆಮಾತು ಇದೆಯಲ್ಲ; ತಮ್ಮ ಕಾಲಬದಿ ಆನೆ ಸತ್ತರೂ ಕಾಣದು ಆದರೆ ಪಕ್ಕದ ಮನೆಲಿ ಇರುವೆ ಸತ್ತ ಬಗ್ಗೆ ಟೀಕೆ ಮಾಡಿದ ಹಾಗೆ.
ನಮ್ಮ ಸುತ್ತ ಮುತ್ತ ಇಂಥಹ ಜನರು ಎಷ್ಟೋ ಸಲ ಕಾಣಲು ಸಿಗಬಹುದು. ಇಂಥವರನ್ನು ಸರಿ ಪಡಿಸಲು ಯಾವ ಔಷಧಿ, ಬೇರು ಕಷಾಯ ಸಿಗದು. ಕಾಲಧರ್ಮವೇ ಪಾಠ ಕಲಿಸಿದರೆ ಸರಿ.
’ಆಚಾರವಿಲ್ಲದ ನಾಲಿಗೆ.. ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ..’!!


For Further Reading,
- Thinking outside the box. The "nine dots" puzzle - CAN U SOLVE IT?
- What’s in store for you in 2015?
- How to bring joy back to your work - Things that we all know ... but we tend to forget some of these sometimes..
- Chanakya's Quotes - Chanakya (Indian politician, strategist and writer,350 BC-275 BC)
- NOT to do anything without proper sanctions: Whatever may be the urgency or importance of the job
0 comments:
Post a Comment